Skip to main content
ಸದ್ಯದಲ್ಲೇ ತೆರೆಗೆ ಬರಲಿದೆ "ಜಯಕೃಷ್ಣ" ATTACK 1 ಚಿತ್ರ.

ಸದ್ಯದಲ್ಲೇ ತೆರೆಗೆ ಬರಲಿದೆ "ಜಯಕೃಷ್ಣ" ATTACK 1 ಚಿತ್ರ.

ಸದ್ಯದಲ್ಲೇ ತೆರೆಗೆ ಬರಲಿದೆ "ಜಯಕೃಷ್ಣ" ATTACK 1 ಚಿತ್ರ.

ಸದ್ಯದಲ್ಲೇ ತೆರೆಗೆ ಬರಲಿದೆ "ಜಯಕೃಷ್ಣ" ATTACK 1 ಚಿತ್ರ.

ಆಕ್ಷನ್ - ಥ್ರಿಲ್ಲರ್ ಆಧಾರಿತ ಚಿತ್ರಕ್ಕೆ ರಾಜ್ ಆನಂದರಾಂ ನಿರ್ದೇಶನ. ಲೂಸ್ ಮಾದ ಯೋಗಿ ಅಭಿನಯದ "ನಂದ ಲವ್ಸ್ ನಂದಿತ" ಚಿತ್ರದ ಯಶಸ್ವಿ ಹಾಡು ಜಿಂಕೆ ಮರಿನಾ.. ಈ ಸೂಪರ್ ಹಿಟ್ ಸಾಂಗ್ ಬರೆದಿದ್ದು, ರಾಜ್ ಆನಂದರಾಂ . ಈಗ ಇವರು ನಿರ್ದೇಶಿಸಿರುವ ಆಕ್ಷನ್ - ಥ್ರಿಲ್ಲರ್ ಆಧಾರಿತ "ಜಯಕೃಷ್ಣ" ATTACK 1 ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದೆ.‌ ಸದ್ಯದಲ್ಲೇ ತೆರೆಗೆ ಬರಲಿದೆ. ಮುರಳಿ ಮೋಹನ್, ಎಚ್.ವಾಸು ಮುಂತಾದ ನಿರ್ದೇಶಕರ ಬಳಿ ಕಾರ್ಯ ನಿರ್ವಹಿಸಿ ಅನುಭವವಿರುವ ರಾಜ್ ಆನಂದರಾಂ ಈ ಹಿಂದೆ ಮೇಸ್ತ್ರಿ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.

ಸದ್ಯದಲ್ಲೇ ತೆರೆಗೆ ಬರಲಿದೆ "ಜಯಕೃಷ್ಣ" ATTACK 1 ಚಿತ್ರ.

ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ನಿರ್ಮಾಣ ಹಾಗೂ ನಿರ್ದೇಶನ ರಾಜ್ ಆನಂದರಾಂ ಅವರದೆ.

ಬೆಂಗಳೂರು, ನೆಲಮಂಗಲ, ದೊಡ್ಡಬಳ್ಳಾಪುರ ಸುತ್ತಮುತ್ತ ಮೂವತ್ತೆರಡು ದಿನಗಳ ಚಿತ್ರೀಕರಣ ನಡೆದಿದೆ. ಓಂ ಫಿಲಂಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಶ್ರೀಮತಿ ಲಕ್ಷ್ಮೀರಮೇಶ್ ಅರ್ಪಿಸುವ ಈ‌ ಚಿತ್ರದ ಸಹ ನಿರ್ಮಾಪಕರು ಆರ್ ಲೋಕೇಶ್, ವೇಣುಗೋಪಾಲ್, ಸುರೇಶ್ ಪೂಜಾರಿ ಹಾಗೂ ದಿನಕರ್ ಪೂಜಾರಿ. ಖ್ಯಾತ ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕುಮಾರ್ ಚಕ್ರವರ್ತಿ ಹಾಗೂ ರಾಘವೇಂದ್ರ ಬಿ ಕೋಲಾರ್ ಈ ಚಿತ್ರದ ಛಾಯಾಗ್ರಹಕರು. ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಬಂಡೆ‌ ಚಂದ್ರು, ಅಶೋಕ್, ಕೌರವ ವೆಂಕಟೇಶ್, ರಾಂದೇವ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ನಿರ್ದೇಶಕ ರಾಜ್ ಆನಂದರಾಂ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ರಶ್ಮಿತಾ ಶೆಟ್ಟಿ, ಜೋಗಿ ನಾಗರಾಜ್, ಕೆ.ವಿ.ಮಂಜಯ್ಯ, ಪ್ರಣತಿ, ಖುಷಿ, ದೀಪು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.