ರಾಯಚೂರು ಜಿಲ್ಲೆಗೆ ಲಕ್ಷ್ಮಣ ರೇಖೆಯಾದ ಡಾ .ಸಿ .ಬಿ ವೇದಾ ಮೂರ್ತಿ.
ರಾಯಚೂರು ಜಿಲ್ಲೆಗೆ ಲಕ್ಷ್ಮಣ ರೇಖೆಯಾದ ಡಾ .ಸಿ .ಬಿ ವೇದಾ ಮೂರ್ತಿ.
ದೇಶದೆಲ್ಲೆಡೆ ಜನರು "ಕೊರೋನಾ" ರೋಗದ ಭೀತಿಯಿಂದ ತತ್ತರಿಸಿದರೆ, ರಾಯಚೂರು ಜಿಲ್ಲೆಯ ಜನರು ಕೊಂಚ ನಿಟ್ಟಿಸುರು ಬಿಡುವಂತಾಗಿದೆ, ಕಾರಣ ಏನಂದರೆ.?ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಒಂದು "ಕೊರೋನಾ"ಶಂಕಿತ ರೋಗದ ವೆಕ್ತಿಗಳು ಕಾಣಿಸದೆ ಇರುವಂತಹದು,ಇದಕ್ಕೆ ಮುಖ್ಯವಾಗಿ ಕಾರಣವೆಂದರೆ ಜಿಲ್ಲೆಗೆ ಲಕ್ಷ್ಮಣ ರೇಖೆಯಂತಾಗಿ, "ಕೊರೋನಾ" ಬಾರದೆ ಇರುವಂತೆ ತಡೆಗಟ್ಟಲು ಕಟ್ಟು ನಿಟ್ಟಿನ ಕಾನೂನು ಸೃಷ್ಟಿ ಮಾಡಿ,ಜಿಲ್ಲೆಯಾದ್ಯಂತ ವಿಶಿಷ್ಟ ರೀತಿಯಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಮೂಲಕ "ಕೊರೋನಾ"ರೋಗ ನಮ್ಮ ಜಿಲ್ಲೆಗೆ ಸುಳಿಯದಂತೆ ಲಕ್ಷ್ಮಣ ರೇಖೆ ಯಂತೆ ಹಗಲಿರುಳು ಸೇವೆ ಮಾಡುತ್ತಿರುವ ಪೊಲೀಸ್ ಅಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಯವರು. ಕೊರೊನ ರೋಗ ಹರಡದಂತೆ ಹಗಲಿರುಳು ದುಡಿಯುತ್ತಿರುವ ಅವರ ಸಾಧನೆಗೆ ಹ್ಯಾಟ್ಸಪ್. ನಮ್ಮ ಜಿಲ್ಲೆಯ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಮಾಡಿ.ಕಟ್ಟು ನಿಟ್ಟಿನ ಕ್ರಮ ತೆಗಿದುಕೊಂಡಿದ್ದಾರೆ.
ಶ್ರೀಶೈಲ ಪಾದಯಾತ್ರೆ ಭಕ್ತಾದಿಗಳನ್ನು ರಾಯಚೂರು ನಿಂದ ವಾಪಸ್ಸು ಕಳಿಸಿಕೊಟ್ಟು ಗುಲ್ಬರ್ಗ, ಹೈದ್ರಾಬಾದ್ ಹತ್ತಿರವಿದ್ದರು ಕೊರೊನ ಸುಳಿಯದಂತೆ ಮಾಡಿರುವ ವಂತಹ ಅಧಿಕಾರಿಯನ್ನು ಪಡೆದಿರುವ ನಾವೆಲ್ಲರೂ ಧನ್ಯರು,ಎನ್ನುತ್ತಿದ್ದಾರೆ ಜಿಲ್ಲೆಯ ಜನರು . ಇದ್ದಕೆ ಪೂರಕವಾಗಿ ಜಿಲ್ಲೆಯ ಜನರು ಜಿಲ್ಲಾಆಡಳಿತ ಎಲ್ಲಾ ನಿಯಮಗ ಳನ್ನ ಪಾಲನೆ ಮಾಡಿ ಕೊಂಡು ಬರುತ್ತಿರುವುದು ಶ್ಲಾಘನಿಯ ವಿಷಯ ವಾಗಿದೆ . ಇನ್ನೂ ನಮ್ಮ ಜಿಲ್ಲೆಯ ಜಿಲ್ಲಾಆಡಳಿತ ಕೊರೋನಾ ವಿರುದ್ಧ ಹೋರಾಟ ಮಾಡಲು ಎಲ್ಲಾ ಮುಂಜಾಗೃತಾ ವಹಿಸಿದೆ .ಸಂತೋಷದ ವಿಷಯ ಇನ್ನೂ ಮುಂದಿನ ದಿನಗಳಲ್ಲಿಯೂ ಕೂಡ ಕಟ್ಟು ನಿಟ್ಟಿನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿ ಕೊಂಡು ಬಂದು ದೇಶಕ್ಕೆ ಮಾದರಿ ಯಾಗಬೇಕಿದೆ.
Recent comments